ತಮಾಷೆ ಪದ್ಯಗಳು

ಎಲ್ಲರ ಮನೆಯ
ಹೆಂಚು ಕಪ್ಪು
ದೋಸೆ ಕಪ್ಪೇನು??
ಕಪ್ಪನ್ನು ಕಪ್ಪೆಂದರೆ…
ಮಕ ಚಿಪ್ಪೇಕೆ??


ಹೆಂಚಿಗೆ ಬರೀ ಕಾಯುವ ಕೆಲಸ!
ಕಾದ ರಬಸಕ್ಕೆ ಬುರು ಬುರು…
ಉಬ್ಬುವ ಕೆಲಸ, ಕಡಿಮೇನು??
ದೋಸೆ ತಿರಿವಿದಂಗೇ…
ಹೆಂಚು ತಿರಿಗಿಸಲು ಸಾಧ್ಯನೇನು??
ಹಾಕಿದ ಹಿಟ್ಟಿಗೆ-
ದೋಸೆ ಆಗುವುದೆಂದೇ ಗೊತ್ತು!!


ಹೆಂಚು ಕಪ್ಪೆಂದು,
ದೋಸೆ ಹೊರಕ್ಕೆ ಜಿಗಿವುದೇ??
ತೂತಾಗದೇ?!
ಹೆಂಚು ನಾಽ…
ದೋಸೆ ನೀಽ….
ಆಸೆ ಪಡುವುದು ತಪ್ಪೇನು??
*

ಹೆಂಡತಿ ಕೇಳಿದಳು:
ಮೆತ್ತಗೆ-
ಸ್ಯಾರೀ…
ಗಂಡ
ಹೇಳಿದ:
ಗತ್ತಿಲಿ-
ಐಯಾಮ್
ಸಾರೀ…
*

ಹದಿಹರೆದಲಿ
ಲವ್ಽ… ಲವ್ಽ…
ಅಂತಾ ಓಡಾಡುತ್ತಾರೆ.
ಮುಪ್ಪಲಿ,
ಲಬ್ಽ… ಲಬ್ಽ…
ಅಂತಾ ಬಡ್ಕೊಂತಾರೆ!
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ನಾನೊಬ್ಬನೆ
Next post ಬಾರವ್ವ ಗಂಗೆ

ಸಣ್ಣ ಕತೆ

  • ಸಾವಿಗೊಂದು ಸ್ಮಾರಕ

    ಶಾಲೆಯ ಮಾಸ್ತರ್ ಆಗಿ ಗಜರಾಜ ಸಿಂಗ್ ಅವರು ಪ್ರೈಮರಿ ಶಾಲೆಯ ಮಕ್ಕಳಿಗೆ ಹೇಳಿಕೊಡುತ್ತಿದ್ದ ಮೊದಲ ಪಾಠವೆಂದರೆ "ತಂದೆ ತಾಯಿಯನ್ನು ಗೌರವಿಸಿ, ಅವರೇ ನಿಮ್ಮ ಪಾಲಿನ ದೈವ" ಎಂದು.… Read more…

  • ದೊಡ್ಡವರು

    ಬೀದಿ ಬದಿಯ ಪುಸ್ತಕದ ಅಂಗಡಿ ಪ್ರಭಾಕರನನ್ನು ಅರಿಯದವರು ಬಹಳ ವಿರಳ. ತಳ್ಳೋ ಗಾಡಿಯ ಮೇಲೆ ದೊಡ್ಡ ಟ್ರಂಕನ್ನಿಟ್ಟು ನಿಧಾನವಾಗಿ ತಳ್ಳಿಕೊಂಡು ಬರುವ ಪ್ರಭಾಕರ ಕೆನರಾ ಬ್ಯಾಂಕಿನ ರಸ್ತೆಬದಿ… Read more…

  • ಟೋಪಿ ಮಾರುತಿ

    "ಏ ಕಾಗಿ, ಕಾಳೀ ಮಗನ! ಯಾಕ ಕೂಗ್ತೀಯಾ?" ಭಾವಿಯಲ್ಲಿಯ ಹಗ್ಗ ಮೇಲೆ ಕೆಳಗೆ ಹೋಗುತ್ತಿರುತ್ತದೆ. ಒಂದು ಮೊಳ ಹಗ್ಗ ಸೇದಿದರೆ ಅರ್‍ಧ ಮೊಳ ಒಳಗೆ ಸೇರಿರುತ್ತದೆ. "ಥೂ… Read more…

  • ಧನ್ವಂತರಿ

    ಡಾ|| ಕೃಷ್ಣ ಪ್ರಸಾದ್ ಮೂಲತಃ ದಕ್ಷಿಣ ಕನ್ನಡ ಜಿಲ್ಲೆಯವರು. ಅವರು ಯಾದಗಿರಿ ಜಿಲ್ಲೆ ಸುರಪುರ ತಾಲ್ಲೂಕಿನ ಕೆಂಭಾವಿಯಲ್ಲಿ ಬಂದು ನೆಲೆಸಿರುವುದೂ ಒಂದು ಆಕಸ್ಮಿಕವೇ. ಒಂದು ದಿನ ತಮ್ಮ… Read more…

  • ಮಂಜುಳ ಗಾನ

    ಶ್ರೀ ಸರಸ್ವತಿ ಕಾಲೇಜಿನ ಪಾಠಪ್ರವಚನಗಳ ಬಗ್ಗೆ ಎರಡನೆ ಮಾತಿಲ್ಲ. ಅತ್ಯಂತ ಉತ್ತಮ ಗುಣಮಟ್ಟದ ಶಿಕ್ಷಣ ವಿದ್ಯಾರ್ಥಿಗಳಿಗೆ ದೊರಕುತ್ತಿತ್ತು. ಆದರೆ ಈ ಕಾಲೇಜಿನ ವಿಶೇಷವೆಂದರೆ ವಿದ್ಯಾರ್ಥಿಗಳ ಮತ್ತು ಉಪನ್ಯಾಸಕರ… Read more…

cheap jordans|wholesale air max|wholesale jordans|wholesale jewelry|wholesale jerseys